11/08/2022
ಆಡಿದ ಮೂರು ಪಂದ್ಯಗಳಲ್ಲಿಯೂ ಸತತವಾಗಿ ಗೆದ್ದ ಬೀಗಿದ "ಮಂಗಳೂರು ಯುನೈಟೆಡ್"
ಮಹಾರಾಜ ಟ್ರೋಫಿ KSCA- T20 2022 ಎಂಟನೇ ಪಂದ್ಯಾವಳಿಯು ಮಂಗಳೂರು ಯುನೈಟೆಡ್ vs ಶಿವಮೊಗ್ಗ ಸ್ಟ್ರೈಕರ್ಸ್ ನಡುವೆ ನಡೆಯಿತು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶಿವಮೊಗ್ಗ ಸ್ಟ್ರೈಕರ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಗಳ ಟಾರ್ಗೆಟ್ ನ್ನು ಮಂಗಳೂರು ಯುನೈಟೆಡ್ ತಂಡಕ್ಕೆ ನೀಡಿತು, 158 ರನ್ನುಗಳ ಗುರಿಯನ್ನು ಬೆನ್ನಟ್ಟಿದ ಮಂಗಳೂರು ಯುನೈಟೆಡ್ ತಂಡವು ಕೇವಲ 2 ವಿಕೆಟ್ ನಷ್ಟಕ್ಕೆ 18 ಒವರ್ ಗಳಲ್ಲಿ ಪಂದ್ಯದ ಗೆಲುವನ್ನು ತನ್ನದಾಗಿಸಿಕೊಂಡಿತು..
ಮಂಗಳೂರು ಯುನೈಟೆಡ್ ತಂಡದ ಪರವಾಗಿ ನಿಕಿಲ್ ಜೋಸೆ 56 ಎಸೆತಗಳನ್ನು ಎದುರಿಸಿ 85 ರನ್ ಕಲೆಹಾಕಿ ಅಧ್ಬುತವಾದ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು , ಅವರಿಗೆ ಜೊತೆಯಾಗಿ ಅಮುತ್ ವರ್ಮ 28 ಎಸೆತಗಳಲ್ಲಿ 41 ರನ್ ಗಳಿಸಿದರು, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ ಬಿರುಸಿನ ಬೌಲಿಂಗ್ ಪ್ರದರ್ಶನವನ್ನು ನೀಡಿದ ವಿಜಯ ಕುಮಾರ್ ವೈಶಾಕ್ 4 ಓವರ್ ಗಳಲ್ಲಿ21 ರನ್ನುಗಳನ್ನು ನೀಡಿ ಮೂರು ವಿಕೆಟ್ ಪಡೆದು ಗಮನ ಸೆಳೆದರು, ಎಮ್ ವೆಂಕಟೇಶ್ 4 ಓವರ್ಗಳಲ್ಲಿ 24 ರನ್ನುಗಳನ್ನು ನೀಡಿ 3 ವಿಕೆಟ್ ಪಡೆದರು..
Mangalore united
-Cricket for unity-