23/06/2017
ಅಶ್ರಫ್- ಹೇಗೆ ಓರ್ವ ನಿಷ್ಠಾವಂತ ಸಾಮಾಜಿಕ ಕಾರ್ಯಕರ್ತ ಮರಣೋತ್ತರ ಕೆಲವು ಫೇಸಿಸ್ಟ್ ಮಾದ್ಯಮದವರಿಂದ ಮಾನನಷ್ಟಕ್ಕೆ ಒಳಗಾದ.
ಮೀಡಿಯಾದಿಂದ ಬರುವ ತಪ್ಪು ಮಾಹಿತಿಯು ಅತ್ಯಂತ ಅಪಯಕಾರಿ ಏಕೆಂದರೆ ಇದು ಸಮಾಜದಲ್ಲಿ ವಿಭಜನೆಯನ್ನು ಉಂಟು ಮಾಡಿ ದ್ವೇಷ ಹರಡಿಸುತ್ತದೆ. ನಿಮಿಷಗಳ ಅಥವಾ ಗಂಟೆಗಳ ಒಳಗೆ ಒಂದು ಟ್ವೀಟ್ ಅಥವಾ ಒಂದು ಕೆಟ್ಟ ಮೂಲದ ಸುದ್ದಿ ಪುನರಾವರ್ತಿತವಾಗಿ ಹಲವಾರು ಸುದ್ದಿಗೋಷ್ಠಿಯಲ್ಲಿ ಹರಡಿದಾಗ ಜನರು ಆ ಸುದ್ದಿಯನ್ನು ನಿಜವೆಂದು ನಂಬುತ್ತಾರೆ. ಯಾವಾಗ ಮೀಡಿಯಾ ಜವಾಬ್ದಾರಿಯ ಸಮಸ್ಯೆ ಎತ್ತಲಾಗುತ್ತದೆ, ಅವರ ಸುಪೋಟಾರ್ಗಳಾದ ನೀತಿ ವಿಶ್ಲೇಷಕರು, ರಾಜಕೀಯ ಉಗ್ರರು ಮತ್ತು ಪತ್ರಕರ್ತರು ಈ ಸಮಸ್ಯೆಯು ಭಾರತೀಯರ "ಸ್ಟುಪ್ಪಿಡಿಟಿಯಿಂದ" ಆಗೋದು ಎಂದು ಮೀಡಿಯಾ ಜವಾಬ್ದಾರಿಯ ಸಮಸ್ಯೆಯ ವಿಷಯವನ್ನೇ ಮುಚ್ಚುಹಾಕುತ್ತ್ತಾರೆ. ದುರಾದ್ರುಷ್ಠವೇನಂದರೆ ಇತ್ತೀಚಿನ ಸಮಯದಲ್ಲಿ ನಿಷ್ಠೆಯಿಂದ ವರದಿಗಳನ್ನು ಪ್ರಕಟಸುವ ಪತ್ರಕರ್ತರು ಬಾರಿ ಕಡಿಮೆ.
ಜೂನ್ 21 ರಂದು ಮಂಗಳೂರಿನ ಬಂಟ್ವಾಳ ತಾಲೂಕಿನಲ್ಲಿ ಅಮಾಯಕ ಅಶ್ರಫ್ ಕೋಮುವಾದಿಗಳಿಗೆ ಬಲಿಯಾದನು. ಈತ ಓರ್ವ ಆಟೋ ಚಾಲಕ ಹಾಗೂ ಸಾಮಾಜಿಕ ಕಾರ್ಯಕ್ರರ್ತರು. ಈತನ ಮರಣ ಸುದ್ದಿಗೋಷ್ಠಿಯಲ್ಲಿ ಬರುವುದು ಸಹಜ, ಆದರೆ ಮಾದ್ಯಮಗಳಾದಂತ ಉದಯವಾಣಿ ಹಾಗೂ ಇನ್ನತರು ಆ ಅಮಾಯಕ ವ್ಯಕ್ತಿಗೆ ರೌಡೀ ಶೀಟರ್ ಪಟ್ಟವನ್ನೇ ಕಟ್ಟಿದರು. ನಿಜವೇನಂದರೆ ಈತನ ವಿರುದ್ದ ಯಾವುದೇ ಒಂದು ಕೇಸ್ ದಾಖಲೇ ಇಲ್ಲ. ಈ ಮಾದ್ಯಮಗಳೂಂದಿಗೆ ಆತ ರೌಡೀ ಶೀಟರ್ ಹೇಗಾದ ಎಂದು ವಿಚಾರಿಸಿದಾಗ ಅವರು ಹೇಳಿದ್ದು ಈ ಮಾಹಿತಿ ಕೊಟ್ಟದ್ದು ಸ್ಟತಃ ಬಂಟ್ವಾಳ ಪೊಲೀಸ್. ಈ ಕೊಲೆ ಸಾಧಾರಣ ಕೊಲೆಯಲ್ಲ, ಇದರ ಹಿಂದೆ ಇರುವ ಉಧ್ಧೇಷವೇ ಕೋಮು ಗಲಭೆ ಹಾಗೂ ರಾಜಕೀಯ ಲಾಭ.
ಇಂತಃ ಸುಳ್ಳು ಸುದ್ದಿಗಳನ್ನು ಹರಡಿಸಿ ಗಲಭೆಯ ಕಾರಣವಾಗಿಸುವುದು ಬೇಹುಗಾರಿಕೆಯಲ್ಲವೇ???
ಇದು ಮಾದ್ಯಮ ಸಂಸ್ಥಗಳ ನೀತಿಶಾಸ್ತ್ರದ ವಿರುದ್ದ ಅಲ್ಲವೇ???
ಇದು ಏನು, ರಾಷ್ಟ್ರೀಯ ವಿರೋಧಿ ಅಲ್ಲವೇ???
ಅಶ್ರಫ್ ಕೊಲೆಯಾದದ್ದು ಎಷ್ಠು ಸತ್ಯವೋ, ಸುದ್ದಿ ಸಂಸ್ಥೆಗಳು ಆತನ ಮರಣನಂತರ, ಮಾಂಸವನ್ನ್ನೇ ತಿನ್ನುವ ಶೈಲಿಯಲ್ಲಿ ಅವನ ವಿರುದ್ದ ಸುಳ್ಳು ಆರೋಪ ಹಾಕಿರುವುದೂ ಅಷ್ಠೇ ಸತ್ಯ. ದೇವರೇ ಆತನ ಹೆತ್ತವರ ಮನಸಿಗೆ ಶಾಂತಿ ಕೊಡು, ಅವನ ಮರಣಾನಂತರದ ಜೀವನವು ಸಂತೋಷವಾಗಿರಲಿ-ಆಮೀನ್.
-ಮೊಹಮ್ಮದ್ ಇರ್ಫಾನ್, ಕೃಷ್ಣಾಪುರ