19/08/2026
ಕಲ್ಲಮುಂಡ್ಕೂರಿನ ಸರ್ವೋದಯ ಪ್ರೌಢಶಾಲಾ ಮೈದಾನದಲ್ಲಿ *ಓಂಕಾರ್ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್®️* ನೇತೃತ್ವದಲ್ಲಿ ಮೊನ್ನೆ ನಡೆದ ಲೋಕಲ್ ಯೂನಿಯನ್ ಪಂದ್ಯಾಕೂಟ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು.
ಎಂಟು ತಂಡಗಳು ಭಾಗವಹಿಸಿದ್ದ ಈ ರೋಚಕ ಪಂದ್ಯಾಕೂಟದಲ್ಲಿ ಆತಿಥೇಯ *ಓಂಕಾರ್ ಕಲ್ಲಮುಂಡ್ಕೂರು ತಂಡ ಅದ್ಭುತ ಪ್ರದರ್ಶನದೊಂದಿಗೆ ವಿನ್ನರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಶೆಟ್ಟಿಗುಡ್ಡೆ ತಂಡ ಉತ್ತಮ ಹೋರಾಟ ನೀಡಿ ರನ್ನರ್ಅಪ್ ಪ್ರಶಸ್ತಿಗೆ ಭಾಜನವಾಯಿತು.*
ಪಂದ್ಯಾಕೂಟದ ಉದ್ಘಾಟನೆಯನ್ನು ವಸಂತ ಸಂಪಿಗೆ, ಸುಕುಮಾರ್ ನಾಯ್ಕ್ ಹಾಗೂ ಇತರ ಗಣ್ಯರು ನೆರವೇರಿಸಿದರು. ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಗರಾಜ್ ಕಾಮತ್, ಸಂದೀಪ್ ಕುತ್ತಟ್ಟ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಆಟಗಾರರನ್ನು ಅಭಿನಂದಿಸಿದರು.
*ಸೇವೆಗೆ ಗೌರವ — ಕೃಷ್ಣ ಅವರಿಗೆ ವಿಶೇಷ ಸನ್ಮಾನ*
*ಕ್ರೀಡೆಯ ಜೊತೆಗೆ ಸಮಾಜಮುಖಿ ಕಾರ್ಯಗಳಿಗೂ ಮಹತ್ವ ನೀಡುತ್ತಿರುವ ಓಂಕಾರ್ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್®️ ವತಿಯಿಂದ ಸ್ಥಳೀಯ ಮೆಸ್ಕಾಂ ಸಿಬ್ಬಂದಿ ಕೃಷ್ಣ ಅವರ ಸೇವೆಯನ್ನು ಗುರುತಿಸಿ ವಿಶೇಷವಾಗಿ ಗೌರವಿಸಿ ಸನ್ಮಾನ�